ಪಠಾನ್ ಕೋಟ್ನಲ್ಲಿ ಉಗ್ರರ ದಾಳಿಯಾದಾಗ ಭಾರತ ಈ ಬಾರಿ ಅಳುತ್ತ ಕೂರಲಿಲ್ಲ. ವಿಯೆಟ್ನಾಂನೊಂದಿಗೆ ಗಟ್ಟಿ ಬಾಂಧವ್ಯ ಹೊಂದುವ ಮೂಲಕ ಚೈನಾಕ್ಕೆ ಸಮರ್ಥ ಸಂದೇಶ ಕೊಟ್ಟಿತು. ಪಾಕೀಸ್ತಾನದ ಮೂಲಕ ಚೈನಾ ನಮ್ಮ ಮೇಲೆರಗಬಹುದಾದರೆ ವಿಯೆಟ್ನಾಂನ ಮೂಲಕ ನಾವೂ ಚೈನಾದೊಂದಿಗೆ ಕಬಡ್ಡಿ ಆಡಬಹುದೆನ್ನುವುದು ಜಗತ್ತಿಗೇ ಅರ್ಥವಾಯ್ತು. ವಿಯೆಟ್ನಾಂ ಬಲಹೀನತೆಯಿಂದ ನರಳುತ್ತಿತ್ತು. ಭಾರತದ ಸಹಕಾರ ಸಿಕ್ಕೊಡನೆ ತಮಗೆ ಸಂಬಂಧಿಸಿದ ಸಮುದ್ರದಲ್ಲಿ ತೈಲ ತೆಗೆಯುವ ಜವಾಬ್ದಾರಿಯನ್ನು ಹೊರಬೇಕೆಂದು ನಮ್ಮನ್ನೇ ಕೇಳಿಕೊಂಡಿತು. ಚೀನಾಕ್ಕಿದು ಕಿರಿಕಿರಿ. ಇದು ಇಷ್ಟಕ್ಕೇ ನಿಲ್ಲಲಿಲ್ಲ. ಅಮೇರಿಕಾ ದಕ್ಷಿಣ ಚೀನೀ ಸಮುದ್ರದಲ್ಲಿ ಚೈನಾದ ಏಕಸ್ವಾಮ್ಯ ಮುರಿಯಲು ಜಂಟಿ ಗಸ್ತು ಯೋಜನೆಗೆ ಭಾರತವನ್ನು ಆಹ್ವಾನಿಸಿತು. ಈ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ ಭಾರತ ಅವಶ್ಯಕತೆ ಬಿದ್ದರೆ ಕೈ ಜೋಡಿಸುವುದಾಗಿ ಹೇಳಿ ಚೈನಾದ ಆತಂಕ ಹಾಗೆಯೇ ಇರುವಂತೆ ನೋಡಿಕೊಂಡಿತು
ಒಂದೆಡೆ ಭಾರತ ತುಂಡಾಗಲೆಂದು ಅರಚಾಡುವ ಯುವ ಸಮಾಜ, ಅವರಿಗೆ ಬೆಂಬಲವಾಗಿ ನಿಂತ ದೇಶದ್ರೋಹಿಗಳು; ಮತ್ತೊಂದೆಡೆ ಕುತ್ತಿಗೆ ಕತ್ತರಿಸಿದರೂ ಭಾರತ ಮಾತೆಗೆ ಜೈ ಎನ್ನಲಾರೆ ಎನ್ನುವವ. ಇವರ ನಡುವೆ ಅತ್ಯಂತ ಶಾಂತವಾಗಿ ಕೆಲಸ ಮಾಡುತ್ತಿರುವ ಕೇಂದ್ರ ಸಕರ್ಾರದ ಮಂತ್ರಿಗಳು.
ವಿದೇಶ ಮಂತ್ರಿಯಾಗಿ ಕಣ್ಣುಕುಕ್ಕುವಂತೆ ಚಟುವಟಿಕೆಯಲ್ಲಿ ನಿರತರಾಗಿರುವ ಸುಷ್ಮಸ್ವರಾಜ್, ರೈಲು ಯಾನದಲ್ಲಿ ಅಭೂತಪೂರ್ವ ಬದಲಾವಣೆಗೆ ಕಾರಣವಾದ ಸುರೇಶಪ್ರಭು; ರಸ್ತೆ ನಿಮರ್ಾಣದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ನಿತಿನ್ ಗಡ್ಕರಿ, ವಿನಾಕಾರಣ ಸುದ್ದಿ ಮಾಡುತ್ತಲೇ ಶಾಂತವಾಗಿ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯತೆಗೆ ಬದ್ಧವಾಗಿರುವ ಸ್ಮೃತಿ ಇರಾನಿ; ಅನಧಿಕೃತವಾಗಿ ಸಕರ್ಾರಿ ಬಂಗಲೆಗಳಲ್ಲಿ ವಾಸವಾಗಿದ್ದವರನ್ನು ಮುಲಾಜಿಲ್ಲದೇ ಹೊರದಬ್ಬಿದ ವೆಂಕಯ್ಯನಾಯ್ಡು, ವಿದ್ಯುತ್ ಕ್ಷೇತ್ರದಲ್ಲಿ ಮಿಂಚಿನ ವೇಗದಲ್ಲಿ ಫಲಿತಾಂಶ ನೀಡುತ್ತಿರುವ ಪೀಯೂಷ್…
View original post 700 more words